ಉದಯಿಸು ರವಿತೇಜನೇ ನೀನು

ಉದಯಿಸು ರವಿತೇಜನೇ ನೀನು
ಹೊಂಗಿರಣವ ಹೊರ ಸೂಸುತ|
ನಿನ್ನ ಸ್ವಾಗತಿಸೆ ಕಾದಿಹಳು ಇಬ್ಬನಿ
ತಬ್ಬಿಕೊಂಡು ಬಾಹುಬಂಧನದಿ
ಕರಗಿ ನೀರಾಗಲು
ಹುಲ್ಲ ಹಾಸಿಗೆಮೇಲೆ ಮಲಗಿ||

ಉದಯಿಸು ರವಿತೇಜನೇ ನೀನು
ಹಕ್ಕಿಗಳ ಇಂಚರವನಾಲಿಸುತ|
ಉದಯಿಸು ರವಿತೇಜನೇ ನೀನು
ಝುಳು ಝುಳು ಹರಿವ ನದಿಯ
ನಿನಾದವನು ಕೇಳುತ||

ಉದಯಿಸು ರವಿತೇಜನೇ ನೀನು
ಕರ್ಮವೀರ ನೇಗಿಲಯೋಗಿಯ
ಪ್ರಣಾಮವನು ಸ್ವೀಕರಿಸುತ|
ಉದಯಿಸು ರವಿತೇಜನೇ ನೀನು
ಹಸುವು ಕರುವಿಗೆ ಪ್ರೀತಿಯಿಂದ
ಹಾಲುಣಿಸುವುದನು ನೋಡುತ||

ಉದಯಿಸು ರವಿತೇಜನೇ ನೀನು
ಗುಡಿಯ ಘಂಟಾನಾದವ ಸೇವಿಸುತ|
ಉದಯಿಸು ರವಿತೇಜನೇ ನೀನು
ದೇಗುಲದ ಕಳಸ ಗೋಪುರ ಬೆಳಗಿಸುತ|
ಉದಯಿಸು ರವಿತೇಜನೇ ನೀನು
ಮಂಗಳಕರ ಸುಪ್ರಭಾತವನಾಲಿಸುತ
ಉದಯಿಸು ಸೂರ್ಯಪ್ರಕಾಶನೇ ನೀನು
ಕೋಟ್ಯಾನುಕೋಟಿ ಜೀವರಾಶಿಯ
ಜೀವನವ ಹೊನ್ನ ಕಿರಣದಿ ಬೆಳಗಲು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂಗವಿಕಲರಿಗೆ ದಾರಿದೀಪ : ಅಂಗ ಸಾಧನ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೬

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys